ಉಮಾಶಂಕರರು 'ವಿಹಾ' ಎಂಬ ಚಂದದ ಪದ್ಯವನ್ನು ಪ್ರಾಚೀನ ಕಾಲದಲ್ಲಿ ಬರೆದಿದ್ದು, ದುರದೃಷ್ಟವಶಾತ್ ಅದೀಗ ಲಭ್ಯವಿಲ್ಲ. ಆದರೆ ಈ ಕೆಳಗಿನ ಹರಟೆಯಿಂದ ನೀವು ಅದರ ಸಾರಾಂಶವನ್ನು ಗ್ರಹಿಸಬಹುದು. ' ವಿಹಾ' ಪದ್ಯಕ್ಕೆ ಸುಮುಖರ ಪ್ರತಿಕ್ರಿಯೆ- ಕಾಳಿದಾಸ ಮೋಡ ನೋಡಿ ದೂತ ಪದ್ಯ ಬರೆದರೆ, ಮಗುವನೊಂದ ನೋಡಿ ನೀವು ಪದ್ಯ ಬರೆದಿರಲ್ಲವೆ! ಶಬ್ದ-ರಸದ ಬರವು ಬಂದು ನಾನು ಸುಮ್ಮನಾಗಿಹೆ, ಶಾರದೆಯನು ಒಲಿಸಿಕೊಂಡ ಗುಟ್ಟು ತಿಳಿಸಬಾರದೆ? ಅಂದ ಹಾಗೆ ವಿಹಳ ಬಗೆಗೆ ನಮಗು ಸ್ವಲ್ಪ ಹೇಳಿರಿ| ಆರು ಆಕೆ ಊರು ಎತ್ತ ಎಂಬುದನ್ನು ತಿಳುಹಿರಿ|| ನನಗೆ ಆಕೆಯನ್ನು ಒಮ್ಮೆ ನೋಡಿದಂತೆ ಅನಿಸಿತು| 'ನಿಮ್ಮ ಸೊಸೆಯೆ?' ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿತು|| ಉಮಾಶಂಕರ್- ಕಾಳಿದಾಸನೆದುರು ನಾನು ಕಲಭದೆದುರಿನಿರುವೆಯು| ಮನಸಿಗೇನು ಬಂತೊ ಅದನೆ ಬರೆವುದೊಂದೆ ಕೆಲಸವು|| ಛಂದವಿಲ್ಲ ಪ್ರಾಸವಿಲ್ಲ! ಲಯವ ಕೊಂಚ ನಂಬಿಹೆ| ರಸಧ್ವನಿಗಳುಸಿರೆ ಇಲ್ಲ ಪದ್ಯಬರೆದೆನೆಂದಿಹೆ|| ಶಾರದೆಯನ್ನೊಲಿಸಿಕೊಂಡ ಗುಟ್ಟು ಬೇಕು ಎಂದಿರಿ| ಅಯ್ಯೊ ಆಕೆ ಎನಗೆ ಒಲಿದ ಳೆಂದು ಪೇಳ್ದರಾರು ರೀ?|| ಆಕೆಗೀಗ ಮಲೆಯನಾಡಿ ನಲ್ಲೆಯಂತೆ ವಾಸವು| ನೀರುಗಾರಿನೂರ ಸುಮುಖ- ರಲ್ಲೆಯಂತೆ ಪೂಜೆಯು|| ಎನಗೆ ಒಲಿದ ದೇವಿ ಲಕುಮಿ, ಎಂತದೆಂದು ಕೇಳ್ದಿರಾ| ಸುಮುಖ ಸಖ್ಯವನ್ನು ತಗುವ ಶ್ರೀಯ ಪೇಳಬಲ್ಲಿರಾ?|| ---- ಜ್ಞಾನಸುಧಾ ಪದವಿ ಪೂರ್ವ ವಿದ್ಯಾಲಯ ಬಲ್ಲಿರಿ| ನಾನು ಹರುಷದಿಂದ ವರುಷ ವೊಂದ ಕಳೆದುದಲ್ಲ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ