ಲೋಹಪುರುಷ

ಹರಿದ ಬಟ್ಟೆಯ ತೆರದಿ ಹಂಚಿಹೋಗಿರೆ ದೇಶ
ಹಿರಿಯ ನಾಯಕರೆಲ್ಲ ಕಣ್ಮುಚ್ಚಿ ಕುಳಿತಿರಲು 
ಮುರಿದು ಬೀಳುತಲಿದ್ದ ಭಾರತವ ಹಿಡಿದಿಟ್ಟ ಲೋಹಪುರುಷಗೆ ನಮಿಪೆನು|
ದೊರೆಗಳೆಲ್ಲರ ಕರೆದು ಪರಿಪರಿಯ ಹಿತವಾಡಿ
ಬರದಿದ್ದ ಭಂಡರನು ಬಲದಿ ಮರ್ದನ ಮಾಡಿ 
ಸರದಾರನೆನಿಸಿರುವ ವಲ್ಲಭನ ಪುತ್ತಳಿಯ ದರುಶನವ ಪಡೆಯೋಣ ಬಾ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ