ಪೋಸ್ಟ್‌ಗಳು

ಛಂದದ ಹರಟೆ

ಉಮಾಶಂಕರರು 'ವಿಹಾ' ಎಂಬ ಚಂದದ ಪದ್ಯವನ್ನು ಪ್ರಾಚೀನ ಕಾಲದಲ್ಲಿ ಬರೆದಿದ್ದು, ದುರದೃಷ್ಟವಶಾತ್ ಅದೀಗ ಲಭ್ಯವಿಲ್ಲ. ಆದರೆ ಈ ಕೆಳಗಿನ ಹರಟೆಯಿಂದ ನೀವು ಅದರ ಸಾರಾಂಶವನ್ನು ಗ್ರಹಿಸಬಹುದು.  ' ವಿಹಾ' ಪದ್ಯಕ್ಕೆ ಸುಮುಖರ ಪ್ರತಿಕ್ರಿಯೆ- ಕಾಳಿದಾಸ ಮೋಡ ನೋಡಿ ದೂತ ಪದ್ಯ ಬರೆದರೆ, ಮಗುವನೊಂದ ನೋಡಿ ನೀವು ಪದ್ಯ ಬರೆದಿರಲ್ಲವೆ!  ಶಬ್ದ-ರಸದ ಬರವು ಬಂದು ನಾನು ಸುಮ್ಮನಾಗಿಹೆ, ಶಾರದೆಯನು ಒಲಿಸಿಕೊಂಡ  ಗುಟ್ಟು ತಿಳಿಸಬಾರದೆ? ಅಂದ ಹಾಗೆ ವಿಹಳ ಬಗೆಗೆ ನಮಗು ಸ್ವಲ್ಪ ಹೇಳಿರಿ| ಆರು ಆಕೆ ಊರು ಎತ್ತ  ಎಂಬುದನ್ನು ತಿಳುಹಿರಿ|| ನನಗೆ ಆಕೆಯನ್ನು ಒಮ್ಮೆ ನೋಡಿದಂತೆ ಅನಿಸಿತು| 'ನಿಮ್ಮ ಸೊಸೆಯೆ?' ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿತು|| ಉಮಾಶಂಕರ್- ಕಾಳಿದಾಸನೆದುರು ನಾನು ಕಲಭದೆದುರಿನಿರುವೆಯು| ಮನಸಿಗೇನು ಬಂತೊ ಅದನೆ ಬರೆವುದೊಂದೆ ಕೆಲಸವು|| ಛಂದವಿಲ್ಲ ಪ್ರಾಸವಿಲ್ಲ! ಲಯವ ಕೊಂಚ ನಂಬಿಹೆ| ರಸಧ್ವನಿಗಳುಸಿರೆ ಇಲ್ಲ ಪದ್ಯಬರೆದೆನೆಂದಿಹೆ|| ಶಾರದೆಯನ್ನೊಲಿಸಿಕೊಂಡ ಗುಟ್ಟು ಬೇಕು ಎಂದಿರಿ| ಅಯ್ಯೊ ಆಕೆ ಎನಗೆ ಒಲಿದ ಳೆಂದು ಪೇಳ್ದರಾರು ರೀ?|| ಆಕೆಗೀಗ ಮಲೆಯನಾಡಿ ನಲ್ಲೆಯಂತೆ ವಾಸವು| ನೀರುಗಾರಿನೂರ ಸುಮುಖ- ರಲ್ಲೆಯಂತೆ ಪೂಜೆಯು|| ಎನಗೆ ಒಲಿದ ದೇವಿ ಲಕುಮಿ, ಎಂತದೆಂದು ಕೇಳ್ದಿರಾ| ಸುಮುಖ ಸಖ್ಯವನ್ನು ತಗುವ ಶ್ರೀಯ ಪೇಳಬಲ್ಲಿರಾ?|| ---- ಜ್ಞಾನಸುಧಾ ಪದವಿ ಪೂರ್ವ ವಿದ್ಯಾಲಯ ಬಲ್ಲಿರಿ| ನಾನು ಹರುಷದಿಂದ ವರುಷ ವೊಂದ ಕಳೆದುದಲ್ಲ...

ಆರ್ಸಿಬಿಗೆ ಕೃಷ್ಣ

ಇಮೇಜ್
ಮ್ಯಾಚು ಆರಾಯ್ತು ಬಹಳ ಕಾದಾಯ್ತು ಜಯವು ಸಿಗಲೆ ಇಲ್ಲ / ಎಬಿಡಿಯಿದ್ದರೂ ಕೊಹ್ಲಿ ಸಿಡಿದರೂ ವೆರ್ತವಾಯಿತೆಲ್ಲ// 'ಕಪ್ಪು ನಮ್ಮದೇ' ಎಂಬ ಘೋಷವದು ಸತ್ಯವಾಗಬೇಕೆ?/ ಒಮ್ಮೆ ಕಿಟ್ಟನನು ಟೀಮ್ಗೆ ಸೇರಿಸಿರಿ, ಹಾಕಿ ಜಯದ ಕೇಕೆ// ೧೩/೦೪/೨೦೧೯ ('ಈ ಸಲ ಕಪ್ಪು ನಮ್ದೇ' ಅಂತ ಎಷ್ಟು ಸಲ ಹೇಳಿದ್ರೂ ಆರ್ಸಿಬಿಗೆ ಇಲ್ಲಿ ತನಕ ಸಿಕ್ಕಿರೋದು ಚಿಪ್ಪು ಮಾತ್ರ. ಆರ್ಸಿಬಿ ಪ್ರತಿ ಪಂದ್ಯ ಸೋತಾಗಲೂ ಅಭಿಮಾನಿಗಳು ದೊಡ್ಡಗೌಡ್ರ ಕುಟುಂಬದವರ ತರ ಅಳ್ತಾ ಇರ್ತಾರೆ. ಕೆಲವು ಅಭಿಮಾನಿಗಳೆಂತೂ ಉರಿ ಸಿನೆಮಾದಲ್ಲಿ ಅಜಿತ್ ಧೋವಲ್ ಮುರಿದ ಮೊಬೈಲಿಗಿಂತಲೂ ಜಾಸ್ತಿ ಟಿವಿ ಮುರಿದಿದ್ದಾರೆ ಅಂತ ಸುದ್ದಿ ಇದೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತನ್ನನ್ನು ಎಷ್ಟು ತಮಾಷೆ ಮಾಡಿದ್ರೂ, ಯಾರೂ ಕೂಡ ಅನುಷ್ಕಾಳ ಟ್ರೋಲ್ ಮಾಡ್ತಾ ಇಲ್ವಲ್ಲಾ ಅಂತ ಸಮಾಧಾನ ಮಾಡ್ಕೊಂಡು ಖುಷಿಖುಷಿಯಾಗಿಯೇ ಆರು ಪಂದ್ಯಗಳನ್ನು ಸೋತಿದ್ದಾನೆ. ಮಲ್ಯ ಓಡಿ ಹೋದರೂ ದೋಷ ಇನ್ನೂ ಉಳಿದಿರುವುದೇ ಸೋಲಿಗೆ ಕಾರಣ ಅಂತ ಬೇರೆ ಕೆಲವರ ಅಂಬೋಣ. ದೋಷ ನಿವಾರಣೆ ಮಾಡಿಸೋಣವೆಂದರೆ ಕಣ್ಣೀರಣ್ಣ ಒಂದು ನಿಂಬೆ ಹಣ್ಣನ್ನೂ ಉಳಿಸಿಲ್ಲವಂತೆ. ನನಗೂ ನೋಡಿ ನೋಡಿ ಸಾಕಾಯ್ತು. ಹಾಗಾಗಿ ಆರ್ಸಿಬಿ ಗೆಲುವು ಕಾಣುವಂತಾಗಲು ನಾನೊಂದು ಸಲಹೆ ಕೊಡುತ್ತೇನೆ. ಅದು ವಿರಾಟ್ ಕೊಹ್ಲಿಗೆ ತಲುಪುವ ತನಕ ಶೇರ್ ಮಾಡಿ :-) Dedicated to all #RCB_fans.)

ದನ-ಕರು

ಕಾಂಕ್ರೇಜ್ ಓಂಗೋಲ್ ಮಾಳವಿ ಗಿರ್ ಕೃಷ್ಣ ಹರಿಯಾರ ಥಾರ್ ಪಾರ್ಕರ್ ದಾಂಗಿ ದೆವನಿ ಬರಗೂರು ರಾಟಿ ಸಿಂಧಿ ಹಳ್ಳಿಕಾರು ಜೊತೆಗೆ ಸೇರಿತು ಕಂಗಾಯಂ ಇವಿಷ್ಟು ಶ್ರೀಮಠದಲ್ಲಿ ಖಾಯಂ (ನಾನು ಪ್ರಾಥಮಿಕ ಶಾಲೆಗೆ ಹೋಗುವ ಸಮಯದಲ್ಲಿ ಶ್ರೀರಾಮಚಂದ್ರಾಪುರಮಠದ ಪತ್ರಿಕೆಯ ಪುರವಣಿಯಲ್ಲಿದ್ದ ಗೋವುಗಳ ಹೆಸರುಗಳನ್ನು ನಾನು ಹೀಗೆ ಜೋಡಿಸಿದ್ದೆ)

ಬಸವ

ಊರು ಕೇರಿಯ ಸುತ್ತಿ ಬಂದೆವಿಲ್ಲಿಗೆ ನಾವು ದಾರಿಯನು ಕೊಡಿರೆಮಗೆ, ಕೊಂಚಮಾತ್ರವೆ ಸಾಕು ತೂರಿ ಸಾಗುತಲಲ್ತೆ ಆಧುನಿಕ ಲೋಕದೊಳು ಜೀವನವ ಮಾಡಿರ್ಪೆವು | ಸಾರಿ ಹೇಳುತಲಿಹೆವು, ಜಾಣ ಮನುಜರೆ ನಿಮಗೆ ಹೋರಿ-ಮಾನವನೆಂಬ ಭೇದವದು ನಮಗಿಲ್ಲ ಸೇರಿ ಜೀವನ ಮಾಳ್ಪ ಸಂಸ್ಕೃತಿಯ ಕುರುಹಾಗಿ ನಾವಿಂದು ಉಳಿದಿರ್ಪೆವು ||

ಅಭಿಜಾತ vs ಅಣಕು

ಉಮಾಶಂಕರ: ಕಾಡನಡುವಲೊಂದು ಪುಟ್ಟ ಹೆಂಚು ಮನೆಯ ಮಾಡಿಕೊಂಡು ಧಾರೆಯಾಗಿ ಬೀಳ್ವ ಮಳೆಯ ನೋಳ್ಪ ಕನಸಿದೆ| ಓಡಿ ಬರುವ ತರಗೆಲೆಗಳ ಮೇಲೆ ಕುಳಿತು ಬರುವ ಗಾಳಿ ಭೋರುಭೋರನೆನಲು ಬೆಚ್ಚಿ ಬೀಳಬೇಕಿದೆ| ಹೊರಗೆ ಗುಡುಗು ಸಿಡಿಲು ಜಗಳ ವಾಡುತಿರಲು ಮನೆಯ ಮಡಿಲ ಮಸುಕು ಮೂಲೆಯಲ್ಲಿ ಕಳೆದು ಹೋಗಬೇಕಿದೆ| ಜಗದ ರೂಕ್ಷ ಗದ್ದಲಗಳ ಮರೆತು ಮತ್ತೆ ಮನವ ತಣಿಪ ಬೆಳಗು ಬೈಗು ವಿಧುವ ಸುಧೆಯ ಸವಿಯಬೇಕಿದೆ| ಪಂಚಭೂತವೆಲ್ಲವುಗಳ ಶಕ್ತಿಯೆದುರು ನನ್ನತನವು ಇಲ್ಲವಾಗಿ ಅವುಗಳನ್ನು ಸೇರಬೇಕಿದೆ| ಸುಮುಖ : ಮನೆಯ ಹೆಂಚು ಸೋರುತಿರಲು ಹಾಳೆ ಸೋಗೆಗಳನು ಕಟ್ಟಿ ಒಳಗೆ ನೀರು ಸುರಿಯದಂತೆ  ತಡೆಯಬೇಕಿದೆ| ಭೋರು ಗಾಳಿಗಲ್ಲಿ ಸಿಕ್ಕಿ ಟಪ್ಪೆನುತ್ತ ಅಡಿಕೆ-ಬಾಳೆ ಮುರಿದು ಬೀಳೆ ಅಯ್ಯೊ-ಶಿವನೆ ಎನ್ನಬೇಕಿದೆ| ಹೊರಗೆ ಕೆಸರ ಕಾಲು ತೊಳೆದ ಬಳಿಕ ಸಿಗುವ ಜಿಗಣೆಗಳನು ಬಚ್ಚಲೊಲೆಯ ಮೂಲೆಗೆಸದು ಕೊಲ್ಲಬೇಕಿದೆ| ಬೆಟ್ಟದಿಂದ ನೀರು ಹರಿದು  ಅಂಗಳಕ್ಕೆ ನುಗ್ಗಿ ಬರಲು ಅಡ್ಡಕಟ್ಟೆಯನ್ನು ಕಟ್ಟಿ  ಬದುಕಬೇಕಿದೆ| ಪಂಚಭೂತವೆಲ್ಲವುಗಳ ಶಕ್ತಿಯೆದುರು ವಿದ್ಯುಚ್ಛಕ್ತಿ ಇಲ್ಲವಾಗೆ ಚಿಮಣಿಯನ್ನು ಹಚ್ಚಬೇಕಿದೆ| ೧೩/೦೬/೨೦೨೪

ಅನುವಾದ-೭

  ಭರ್ತೃಹರಿ: ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ ಸಾಪ್ಯನ್ಯಮಿಚ್ಛತಿ ಜನೋಪ್ಯಯಮನ್ಯಸಕ್ತಃ| ಅಸ್ಮತ್ಕೃತೇ ಚ ಪರಿತುಷ್ಯತಿ ಕಾಚಿದನ್ಯಾ ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ||   ಅನುವಾದ: ನಾನು ಯಾವಳನು ಸದಾ ನೆನೆಯುವೆನೊ ಆಕೆಗಾನು ಬೇಡ ಆಕೆ ಕಾಮಿಸುವವನಿಗೆ ಪ್ರೀತಿ ಇನ್ನೊಬ್ಬಳಲ್ಲಿ, ನೋಡ|| ಆ ತರುಣಿ ನೋಡೆ ತನ್ನ ಒಲುಮೆಯನು ಇಟ್ಟಳೆನ್ನ ಒಳಗೆ  ಧಿಕ್ಕಾರವಿರಲಿ! ಈ ನಾಲ್ವರಿಂಗೆ ಮತ್ತೆ ಮನ್ಮಥಂಗೆ||

ಅನುವಾದ-೬

 ಮೂಲ: ಅಖಿಲೇಷು ವಿಹಂಗೇಷು ಸತ್ಸು ಸ್ವಚ್ಛಂದಚಾರಿಷು| ಶುಕ ಪಂಜರಬಂಧಸ್ತೇ ಮಧುರಾಣಾಂ ಗಿರಾಂ ಫಲಮ್|| ಸುಮುಖಾನುವಾದ: ಮನಬಂದ ಕಡೆಗೆಲ್ಲ ಹಾರುವವು ಹಕ್ಕಿಗಳು ಬಾನಿನಗಲಕ್ಕೆಲ್ಲಿ ಮೇರೆಯುಂಟು? ಪಂಜರದ ಗಿಳಿಗಳಿವೆ ಬಂಧನದ ಬಿಗಿಯೊಳಗೆ  ಮಧುರ ನುಡಿಗಳಿಗಿಷ್ಟೆ ಜಾಗವುಂಟು!